Dharmasthala Uchita Samuhika Vivaha 2026: ಇಂದಿನ ದಿನಗಳಲ್ಲಿ ಮದುವೆ ಎಂಬುದು ಸಂತೋಷದ ಕ್ಷಣವಾಗಬೇಕಾಗಿದೆ. ಆದರೆ, ಹಲವಾರು ಕುಟುಂಬಗಳಿಗೆ ಅದು ಆರ್ಥಿಕ ಒತ್ತಡ, ಸಾಲ ಬಾಧೆ ಮತ್ತು ಸಾಮಾಜಿಕ ತೋರಾಟದ ವೇದಿಕೆಯಾಗುತ್ತಿರುವುದು ದುರಂತ.
ಇAತಹ ಸಂದರ್ಭದಲ್ಲೇ, ಧರ್ಮಸ್ಥಳದ ‘ಉಚಿತ ಸಾಮೂಹಿಕ ವಿವಾಹ ಯೋಜನೆ’ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಶಾಕಿರಣವಾಗಿದೆ.
ಧರ್ಮಸ್ಥಳದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಏಪ್ರಿಲ್ 29ರಂದು ಸಂಜೆ 6.40ಕ್ಕೆ, ಗೋಧೂಳಿ ಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಲಾಗುವ ಈ ಮಹತ್ವದ ಕಾರ್ಯಕ್ರಮಕ್ಕೆ ಈಗಿನಿಂದಲೇ ಅರ್ಜಿ ಆಹ್ವಾನಿಸಲಾಗಿದೆ.
ಈ ಸಾಮೂಹಿಕ ವಿವಾಹಕ್ಕೆ ಮೊದಲ ವಿವಾಹಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಎರಡನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇದರಿಂದ ಈ ಯೋಜನೆಯ ಪಾವಿತ್ರ್ಯ ಮತ್ತು ಸಾಮಾಜಿಕ ಉದ್ದೇಶ ಮತ್ತಷ್ಟು ಗಟ್ಟಿಯಾಗುತ್ತದೆ.
PM Awas Yojana- ಮನೆ ನಿರ್ಮಾಣಕ್ಕೆ ₹2.50 ಲಕ್ಷ ಸಹಾಯಧನ | ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಆಹ್ವಾನ
ಸಮಾಜ ಸುಧಾರಣೆಯ ಮಹಾನ್ ಉದ್ದೇಶ
ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹದ ಹಿಂದೆ ಇರುವ ಉದ್ದೇಶ ಅತ್ಯಂತ ಶ್ರೇಷ್ಠವಾದದ್ದು. ವರದಕ್ಷಿಣೆ, ದುಂದುವೆಚ್ಚ ಮತ್ತು ಅತಿರೇಕದ ಮದುವೆ ಸಂಪ್ರದಾಯಗಳನ್ನು ತಡೆಗಟ್ಟುವ ಸಲುವಾಗಿ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು 1972ರಲ್ಲಿ ಈ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಆರಂಭಿಸಿದರು.
ಇದೊAದು ಸಾಮಾಜಿಕ ಚಳವಳಿಯಾಗಿದ್ದು; ಇದುವರೆಗೆ ಸುಮಾರು 13,000ಕ್ಕೂ ಹೆಚ್ಚು ಜೋಡಿಗಳು ಧರ್ಮಸ್ಥಳದ ವೇದಿಕೆಯಲ್ಲಿ ಸರಳವಾಗಿ, ಗೌರವಯುತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬುದು ಈ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ.

ವಧು-ವರರಿಗೆ ನೀಡಲಾಗುವ ಸೌಲಭ್ಯಗಳು
ಧರ್ಮಸ್ಥಳದ ಸಾಮೂಹಿಕ ವಿವಾಹ ಎಂದರೆ ಕೇವಲ ಮದುವೆ ಕಾರ್ಯಕ್ರಮವಷ್ಟೇ ಅಲ್ಲ, ಅದು ಗೌರವದೊಂದಿಗೆ ಹೊಸ ಜೀವನಕ್ಕೆ ಕಾಲಿಡುವ ವ್ಯವಸ್ಥೆ.
ಈ ಸಂದರ್ಭದಲ್ಲಿ, ಮದುವೆಯ ಖರ್ಚಿನ ಬಗ್ಗೆ ಕುಟುಂಬಗಳು ಯಾವುದೇ ಚಿಂತೆಯಲ್ಲಿ ಬೀಳಬೇಕಾದ ಅವಶ್ಯಕತೆ ಇಲ್ಲ. ಸಂಸ್ಥೆಯ ವತಿಯಿಂದ ವರನಿಗೆ ಧೋತಿ ಮತ್ತು ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ ಮತ್ತು ಹೂವಿನ ಹಾರ ನೀಡಲಾಗುತ್ತದೆ.
ಮದುವೆಗೆ ಅಗತ್ಯವಿರುವ ಸಂಪೂರ್ಣ ವೆಚ್ಚವನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಭರಿಸುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ
ಮದುವೆಯಾಗಲು ಆಸಕ್ತರಾಗಿರುವವರು 2026ರ ಏಪ್ರಿಲ್ 25ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸವಿವರವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆ ಸರಳವಾಗಿದ್ದು, ವಿವರಗಳಿಗಾಗಿ ನೇರವಾಗಿ ಸಂಪರ್ಕಿಸಬಹುದು. ಮಾಹಿತಿಗಾಗಿ ಸಂಪರ್ಕ ಸಂಖ್ಯೆ:
- ದೂರವಾಣಿ: 08256-266644
- ವಾಟ್ಸಾಪ್: 9663464648, 8147263422
ಅರ್ಜಿ ಸಲ್ಲಿಸುವ ವೇಳೆ ದಾಖಲೆಗಳ ಪೂರ್ಣತೆ ಮತ್ತು ಮಾಹಿತಿಯ ನಿಖರತೆ ಅತ್ಯಂತ ಮುಖ್ಯವಾಗಿರುತ್ತದೆ.
ಸರಳತೆ, ಸೇವೆ ಮತ್ತು ಸಂಸ್ಕಾರದ ಸಂಕೇತ
ಧರ್ಮಸ್ಥಳದ ಸಾಮೂಹಿಕ ವಿವಾಹವು ‘ಸರಳ ಜೀವನ, ಉನ್ನತ ಚಿಂತನೆ’ ಎಂಬ ಮೌಲ್ಯವನ್ನು ಸಮಾಜಕ್ಕೆ ಸಾರುತ್ತದೆ. ಮದುವೆ ಅಂದರೆ ಅತಿರೇಕವಲ್ಲ, ಅದು ಎರಡು ಜೀವಗಳ ಪವಿತ್ರ ಬಂಧನ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸ್ಪಷ್ಟವಾಗಿ ನೀಡುತ್ತದೆ.
ಆರ್ಥಿಕ ಸಂಕಷ್ಟ, ಸಾಮಾಜಿಕ ಒತ್ತಡಗಳ ನಡುವೆಯೂ ಮದುವೆ ಮಾಡಿಕೊಳ್ಳಲು ಕಷ್ಟಪಡುವ ಅನೇಕ ಕುಟುಂಬಗಳಿಗೆ ಧರ್ಮಸ್ಥಳದ ಈ ಉಚಿತ ಸಾಮೂಹಿಕ ವಿವಾಹವು ನಿಜಕ್ಕೂ ದೇವರ ವರದಂತಿದೆ.
ಸರಳ, ಪವಿತ್ರ ಮತ್ತು ಗೌರವಯುತ ವಿವಾಹಕ್ಕೆ ಧರ್ಮಸ್ಥಳವೇ ಸರಿಯಾದ ವೇದಿಕೆ. ಅರ್ಹರು ಈ ಸುವರ್ಣಾವಕಾಶವನ್ನು ಬಳಸಿಕೊಂಡು ಹೊಸ ಬದುಕಿಗೆ ಶುಭಾರಂಭ ಮಾಡಿಕೊಳ್ಳಲಿ…
1 thought on “Dharmasthala Uchita Samuhika Vivaha 2026- ಧರ್ಮಸ್ಥಳ ಉಚಿತ ಸಾಮೂಹಿಕ ವಿವಾಹ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸೋ ವಿವರ ಇಲ್ಲಿದೆ…”